ಹೊಲೆಯ

ಶುಚಿಯು ನಗುತಲೆ ಹಿಂದೆ ಬರ್‍ಪಳು
ಉಚಿತ ಮಾರ್‍ಗವು ತನಗಿದೆನುತಲೆ
ಸಚಿವ! ಹೊಲೆಯನು ಹಿರಿಯ ಪೊರೆವನು ಹೊರಟು ನಿಂದೆಡೆಗೆ.

ಸಚಿವ ಬಾ ಧರೆಯೆಲ್ಲವಳೆಯುವ…….
ಶುಚಿಯ ಜಾನ್ಹವಿ ಹರಿದು ಶ್ರೀ ಹರಿ
ಗುಚಿತದಾಸನವಾಗಲೀಧರೆ ಪರೆಯ ಬಾ ಧೊರೆಯೆ!

ಚಿಗುರಿ ಬೆಳೆಯದ ಮನಗಳಿಲ್ಲಿವೆ
ಚಿಗಿದು ಉರಿಯದ ಭಾವವಿಲ್ಲಿದೆ
ಮೃಗದ ಗವಿಯೊಲು! ಹೊಲಸ ನಿಟ್ಟಿದೆ ಹೊಲೆಯ ನಿಲ್ಲದೆಲೆ.

ನಗುವ ತಾಣವ ಕಂಡೆಯಾದರೆ!
ಹೊಗೆಯು ಸುತ್ತಿರೆ ಜಗದ ಕಳೆಯನು
ಅಗಗೊ! ಹೊಲೆಯನ ಹೆಜ್ಜೆ ಹರಿದಿದೆ ನಾಡಿನುದ್ಧರಕೆ!

ತವಕ ಪಡದಿರು ಧರೆಯ ದೂರಿಗೆ,
ಭವದರಜದಲಿ ಹೊರಳಿ ಆಳುವ!
ಇವರ ಪುಣ್ಯಕೆ ನಾವು ಕಾರಣರೆನಿಸಿ ಬಾಳುವಣ.

ಭವದ ನಂಜನು ಕುಡಿದು ಕಾಯ್ದನ
ಶಿವನ ಸಮ್ಮುಖದಲ್ಲಿ ಹಿರಿಯನು
ಭವಣೆಯೆನ್ನದಲವನ ಸೃಷ್ಠಿಯ ಶುಭ್ರ ಮಾಡಿದವ!

ನಾಡ ಕುವರರ ಮಾಡೆ ಪರರನು
ನೋಡು ನೋಡವು ಹಿರಿಯರಾರ್ಜನೆ!
ಖೋಡಿ ಖೂಳರ ಸೇರುತಿರ್ಪವು ಇಹಕೆ ಪರಕಿರದೆ!

ಮಾಡದಿರು ಹುಲುಮನುಜ! ಭೇದವ!
ಆಡದಿರು ಪರ ಪರೆಯನೆನುತಲೆ!
ನಾಡ ಮಂಗಳಕಾರಿ! ನಿನ್ನನು ದೂರದೂರೆನುವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೦
Next post ನವಿಲುಗರಿ – ೧೩

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys